Tuesday, August 31, 2010

ಜಗದೆಲ್ಲಾ ಕತ್ತಲಿಗೆ ನೀನಲ್ಲ ಬೆಳಕು.......

''ಛೇ ನಂಗೇ ಹೀಗಾಗ್ಬೇಕಾ?... ಪ್ರಪಂಚದಲ್ಲಿ ಕಷ್ಟ, ಸಮಸ್ಯೆ ಎಲ್ಲಾ ನನಗೋಸ್ಕರನೇ ಹುಟ್ಟಿದೆ ಅಂತಾ ಕಾಣುತ್ತೆ...

ಸೋಲಿಗೆ ಮುದುಡಿಕೊಳ್ಳುವ ಹತಾಶ ಮನಸ್ಸು ಗೊಣಗುಟ್ಟುವ ವಾಕ್ಯವೇ ಇದು.

ಬಹುಶ: ಈ ನಂಗೇ'' ಅನ್ನುವ ವಾಕ್ಯವಿದೆಯಲ್ಲಾ ಅದು ಯಾರನ್ನೂ ಬಿಟ್ಟಿಲ್ಲ. ಯಾವುದೇ ಸಮಸ್ಯೆ ಬಂದರೂ 'ನಂಗೇ ಹೀಗಾ?'' ಎಂದು ಯೋಚಿಸುವವರೇ ಹೆಚ್ಚು ವಿನಹ ಇಷ್ಟೇ ತಾನೆ ಹೆಚ್ಚೇನು ಆಗಿಲ್ಲವಲ್ಲ'' ಎಂದು ಧನಾತ್ಮಕವಾಗಿ ಯೋಚಿಸುವವರೇ ಇಲ್ಲ.

ಈ ಜಗತ್ತಿನಲ್ಲಿ ಯಾರ ಮನ ಹೊಕ್ಕು ನೋಡಿದರೂ ಏನೋ ನಿರಾಶೆ, ನೋವು, ಕೋಪ ಇರಬಹುದೇ ಹೊರತು; ನಾನು ತುಂಬಾ ಹ್ಯಾಪ್ಪಿ'' ಎಂದು ಯಾರೂ ಹೇಳುವುದಿಲ್ಲ. ಹಾಗಿದ್ರೆ ಈ ನೋವು ಇದ್ದಂತೆ ಖುಷಿ ಖುಷಿಯಾಗಿರೋಕೆ ಸಾಧ್ಯವಿಲ್ಲವಾ? ಖಂಡಿತಾ ಸಾಧ್ಯ. ನಮ್ಮನ್ನಾವರಿಸಿರುವ ಒತ್ತಡ, ಹತಾಶೆ, ದು:ಖ, ಕೋಪ ಎಲ್ಲವನ್ನೂ ಒತ್ತಟ್ಟಿಗೆ ಸರಿಸಿ ನೋಡಿದರೆ ಎಲ್ಲರೂ ಸುಖಿಯೇ. ಯಾಕೆಂದರೆ ಆನಂದದ ಹಿತಾನುಭವ ಇರುವುದು ನಮ್ಮಲ್ಲಿಯೇ...


ಜೀವದಲ್ಲಿ ಸುಖವನ್ನೇ ಒದ್ದುಕೊಂಡು ಬರುವವರು ಯಾರೂ ಇಲ್ಲ. ನೋವು ನಲಿವುಗಳನ್ನು ಎಲ್ಲರೂ ಎದುರಿಸಲೇಬೇಕು. ಇದಕ್ಕೆ ವಯಸ್ಸಿನ ಹಂಗಿಲ್ಲ. ಲಿಂಗ ಬೇದವಿಲ್ಲ. ಸ್ಕೂಲಿಗೆ ಹೋಗುವ ಪುಟ್ಟ ಮಗುವಿಗೂ ಹಲವಾರು ಸಮಸ್ಯೆಗಳು. ಟ್ಯೂಷನ್, ಹೋಂ ವಕರ್್ ಹಾವಳಿಯಲ್ಲಿ ಕಳೆದುಹೋಗುವ ಬಾಲ್ಯ. ಆಟವಾಡಿ ಕೇಕೆ ಹಾಕಬೇಕೆಂದರೂ ಅಪ್ಪ ಅಮ್ಮನ ಉರಿನೋಟ. ಎಲ್ಲಾ ಇರುವಾಗಲೂ ಯಾವುದೋ ಒಂದು ಇಲ್ಲದಿರುವ ನೋವಲ್ಲಿ ಬೆಳೆಯುತ್ತದೆ.

ಇನ್ನು ಹೆಣ್ಣುಮಕ್ಕಳ ವಿಷಯಕ್ಕೆ ಬಂದರೆ ಅವರಿಗೆ ಸಮಸ್ಯೆ ಬೆಟ್ಟದಷ್ಟು. ಸಣ್ಣ ನೋವು, ಸೋಲಿಗೂ ಕುಗ್ಗಿ ಹೋಗುತ್ತಾರೆ. ಅದೇ ಸಂತೋಷವಾದಾಗ ಬೆಟ್ಟದಷ್ಟು ಸಂಭ್ರಮಿಸುತ್ತಾರೆ. ಎಲ್ಲೋ ಸೋಲಾದಾಗ ಜೀವನವೇ ಕೈಕೊಟ್ಟಷ್ಟು ಕಂಗಾಲಾಗುತ್ತಾರೆ. ತಮ್ಮನ್ನಾವರಿಸಿರುವ ಸಮಸ್ಯೆಗಳ ಪರಿಹಾರಕ್ಕಿಂತಲೂ ಸಮಸ್ಯೆ ಬಗ್ಗೆಯೇ ತಲೆಕೆಡಿಸಿಕೊಳ್ಳುವ ಇವರು, ನಂಗೇ ಹೀಗಾಗುತ್ತಲ್ಲ'' ಎಂಬ ಉದ್ಗಾರದೊಂದಿಗೆ ಗಂಗಾ ಯಮುನಾ ಹರಿಸಿಬಿಡುತ್ತಾರೆ.

ವಾಸ್ತವದಲ್ಲಿ ಯಾವ ಸಮಸ್ಯೆ, ನೋವು, ನಲಿವುಗಳಾದರೂ ನಮ್ಮಿಂದಲೇ ಕ್ರಿಯೇಟ್ ಆಗಿರುತ್ತದೆಯೇ ಹೊರತು ಅದಾಗಿ ನಮ್ಮ ಮೇಲೆ ಬಂದೆರಗುವುದಿಲ್ಲ. ನೋಡುವ ದೃಷ್ಟಿ ಪಾಸಿಟಿವ್ ಆಗಿದ್ದರೆ ಆಕ್ಟೀವ್ ಆಗಿ ಜಿಗಿಯುತ್ತಾ ಮುಂದೆ ಸಾಗಬಹುದು. ಯಾವುದೇ ಸಮಸ್ಯೆಯಿದ್ದರೂ ನಿರ್ಮಲ ಚಿತ್ತದಿಂದ ನಸು ನಗುವಿನೊಂದಿಗೆ ಮುಂದಕ್ಕೆ ಸಾಗಿ. ಆನಂದ ಎಲ್ಲಿಯೋ ಇರುವುದಿಲ್ಲ. ಅದು ನಮ್ಮಲ್ಲೇ ಇದೆ. ಯಾವುದೇ ಪರಿಸ್ಥಿತಿಯಲ್ಲಿ ನಿರಾಳವಾಗಿರುವುದನ್ನು ಫೀಲ್ಗುಡ್'' ಅಥವಾ ಹಿತಾನುಭವ ಅನ್ನುತ್ತಾರೆ.

ಜೀವನದಲ್ಲಿ ಎನೇ ಬಂದರೂ ಡೋಂಟ್ ಕೇರ್ ಎಂದು ನಗುತ್ತಾ ಇರಬೇಕೆ. ಹಾಗಿದ್ದರೆ ಕೆಳಗಿನ ಅಂಶಗಳನ್ನು ಗಮನಿಸಿ.

ಎಲ್ಲರೂ ನಿಮ್ಮಂತವರೇ

ನಿಮ್ಮೆಲ್ಲಾ ದು:ಖಗಳಿಗೆ, ನೋವುಗಳಿಗೆ ಇನ್ನೊಬ್ಬರನ್ನಷ್ಟೇ ಹೊಣೆ ಮಾಡಬೇಡಿ. ನಿಮ್ಮ ಬಗ್ಗೆ ನಿಮಗೆ ಪಫರ್ೆಕ್ಟ್ ಎನ್ನುವ ಭಾವನೆ ಇರಬಹುದು. ಆದರೆ ನಿಮ್ಮ ಬೇಜಾರಿಗೆ ಕಾರಣವಾಗುವವರೂ ನಿಮ್ಮತೆಯೇ ಯೋಚಿಸುತ್ತಾರೆ ಎಂಬುದನ್ನು ಮರೆಯದಿರಿ

ಇದ್ದಂತೆಯೇ ಸ್ವೀಕರಿಸಿ

ಆತ್ಮೀಯರನ್ನು ಅವರ ಲೋಪಗಳ ಸಮೇತ ಸ್ವೀಕರಿಸಿ. ನಿಮ್ಮೊಂದಿಗೆ ನಿಮ್ಮವರೂ ಚೆನ್ನಾಗಿದ್ದರೆ ನೀವು ಹ್ಯಾಪ್ಪಿಯಾಗಿರುವುದರಲ್ಲಿ ಸಂಶಯವಿಲ್ಲ. ನೀವು ಸಂತೋಷವಾಗಿದ್ದಾಗ ಬೇರೆಯವರ ಜೀವನದಲ್ಲಿ ಆನಂದವನ್ನು ತುಂಬುವ ಪ್ರಯತ್ನ ಮಾಡಿ. ಎಲ್ಲರೂ ಚೆನ್ನಾಗಿರಲಿ ಎಂದು ಹಾರದೈಸುವಲ್ಲಿ ನೈಜ ಆನಂದವಿದೆ. ನಿಜವಾಗಿಯೂ ನಿಮ್ಮ ತಪ್ಪಿಲ್ಲದೆಯೇ ನಿಮಗೆ ದು:ಖವಾಗಿದ್ದರೆ ಅಂತವರ ಕಡೆಗೊಂದು ಕನಿಕರದ ನಗುಬೀರಿ ನೀವು ಮುನ್ನಡೆಯಿರಿ.

ಸಕಾರಾತ್ಮಕವಾಗಿ ಯೋಚಿಸಿ

ಒಂದು ವೇಳೆ ನಿಮ್ಮ ಪ್ರೀತಿ ಕೈಕೊಟ್ಟಿತು ಎಂದುಕೊಳ್ಳಿ ಭಗ್ನ ಪ್ರೇಮಿಯಾಗುವ ಬದಲು ಅದು ಪ್ರೀತಿ ನಿಜವೇ ಅಗಿದ್ದಲ್ಲಿ ಕೈಕೊಟ್ಟಿತ್ತಾದರೂ ಯಾಕೆ? ಎಂಬ ಪ್ರಶ್ನೆ ಮಾಡಿಕೊಳ್ಳಿ. ಅದು ಪ್ರೀತಿ ಆಗಿಲ್ಲದಿದ್ದರೆ ಮೋಸ ಹೋಗಿದ್ದೇ ಒಳ್ಳೆದಾಯಿತಲ್ಲವೇ?.ಹೀಗೆ ಸಕಾರಾತ್ಮಕವಾಗಿ ಯೋಚಿಸಿದರೆ ಎಲ್ಲವನ್ನೂ ಹಿಮ್ಮೆಟ್ಟಿ. ನನ್ನ ಗುರಿ ಮುಂದಿದೆ ಎಂಬ ಜಸ್ಟ್ ಸ್ಮೈಲ್ನೊಂದಿಗೆ ಮುಂದುವರೆಯಿರಿ. ನಿಮ್ಮ ನಿಧರ್ಾರವನ್ನು ಸಂಪೂರ್ಣವಾಗಿ ಸ್ವೀಕರಿಸಿ. ಎಲ್ಲವೂ ನಮ್ಮ ಒಳ್ಳೆಯದಕ್ಕೆ ಅಂದುಕೊಳ್ಳುವುದಷ್ಟೇ ಅಲ್ಲ. ಮನ:ಸ್ಪೂತರ್ಿಯಾಗಿ ಅಂಗೀಕರಿಸಬೇಕು. ಪ್ರತಿಕೂಲ ಪರಿಸ್ಥಿತಿಯಲ್ಲೂ ಅನುಕೂಲವನ್ನು ಹುಡುಕಬೇಕು.


ಕೋಪ ನಿಯಂತ್ರಿಸಿ:

ಕೋಪವನ್ನು ಮನಸ್ಸಿನಲ್ಲಿ ಅಡಗಿಸಿಕೊಳ್ಳುವುದು ಸರಿಯಲ್ಲ. ಹಾಗೆಂದು ಒಂದೇ ಸಲ ಸ್ಪೋಟಗೊಳಿಸುವುದೂ ಸರಿಯಲ್ಲ. ಬಲವಂತದಿಂದ ಮನಸ್ಸನ್ನು ಬೇರೆಡೆಗೆ ಹೊರಳಿಸಿ. ಕ್ರೀಡಾಪ್ರಿಯರಾಗಿದ್ದರೆ ಅದರತ್ತ ಗಮನಹರಿಸಿ. ಪುಸ್ತಕ ಅಥವಾ ಯೋಗಕ್ಕೆ ಮೊರೆಹೋಗುವುದು ಬೆಸ್ಟ್.


ಕೆಲಸದಲ್ಲಿ ನಿಷ್ಠೆ ಇರಲಿ

ನೀವು ಕೈಗೊಳ್ಳುವ ಕೆಲಸ ಯಾವುದೇ ಇರಲಿ ಪ್ರೀತಿಯಿಂದ ಮಾಡಿ. ಇದರಿಂದ ಮಾಡಿದ ಕೆಲಸದಲ್ಲಿ ತೃಪ್ತಿ ಇರುತ್ತದೆ. ಕೆಲಸದಲ್ಲಿ ನಿಷ್ಠೆ ಇದ್ದರೆ ಎಡವಟ್ಟಾಗಿ ದು:ಖ ಅನುಭವಿಸುವ ಪ್ರಮೆಯವೇ ಇಲ್ಲ.

ಉಲ್ಲಸಿತರಾಗಿರಿ

ಸದಾ ಉಲ್ಲಾಸಿತರಾಗಿರುವುದನ್ನು ಹಾಬಿಯಾಗಿ ಮಾಡಿಕೊಳ್ಳಿ. ಉತ್ತಮ ಆರೋಗ್ಯ, ದಿನಚರಿ ಮೈಗೂಡಿಸಿಕೊಳ್ಳ್ಳಿ. ಉತ್ತಮ ಹವ್ಯಾಸ ರೂಡಿಸಿಕೊಳ್ಳುವುದರಿಂದ ಸದಾ ಚೈತನ್ಯ ಚಿಲುಮೆಯಾಗಿರಬಹುದು. ಎಲ್ಲರೊಂದಿಗೂ ನಗುನಗುತ್ತಾ ವ್ಯವಹರಿಸಿ. ಇದು ನಿಮ್ಮ ವ್ಯಕ್ತಿತವಕ್ಕೊಂದು ಶೋಭೆ ತರುತ್ತದೆ.

ನೆರವಾಗಿ

ಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನಸಿಕ ತೃಪ್ತಿ ನೀಡುತ್ತದೆ. ಅನ್ಯರಿಗೆ ಬೇಕಾದಾಗ ಸಹಾಯ ನೀಡಿ ಅದರಲ್ಲಿರುವ ಸುಖ ಅನುಭವಿಸಿದವರಿಗಷ್ಟೇ ತಿಳಿಯುತ್ತದೆ. ಆದರೆ ನಿಮ್ಮ ಸಹಾಯಕ್ಕೆ ಪ್ರತ್ಯುಪಕಾರ ಬಯಸಬೇಡಿ. ಸ್ವಚ್ಛ ಮನಸ್ಸಿನಿಂದ ಆನಂದ ಅನುಭವಿಸಲು ಸಾಧ್ಯವಿಲ್ಲ.

ಮೌನ, ವಿಶ್ರಾಂತಿ:

ಮೌನ ಅತ್ಯಂತ ಉತ್ತಮ ಔಷಧಿ. ನಿಮ್ಮ ಭಾವೋದ್ವೇಗವನ್ನು ಮೌನ ಕ್ರಮಬದ್ದಗೊಳಿಸುತ್ತದೆ. ಏಕಾಂತದಲ್ಲಿ ನಿಮ್ಮನ್ನು ನೀವು ತೆಗೆದುಕೊಳ್ಳಿ. ಸರಿ ತಪ್ಪುಗಳ ಬಗ್ಗೆ ವಿಮಶರ್ೆ ಮಾಡಿ. ಮನಸ್ಸು ಎಷ್ಟು ವಿಶ್ರಾಂತಗೊಳ್ಳುತ್ತದೋ ಅಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮನಸ್ಸು ಗೊಂದಲದಲ್ಲಿರುವಾಗ ಯಾವುದೇ ನಿಧರ್ಾರ ತೆಗೆದುಕೊಳ್ಳಬೇಡಿ. ಉತ್ತಮ ಆಹಾರ ಸೇವಿಸಿ. ಕಣ್ಣುತುಂಬಾ ನಿದ್ರಿಸಿ. ಇಲ್ಲಿಗೆ ಅರ್ಧ ಸಮಸ್ಯೆ ನೀಗುತ್ತದೆ. ಪ್ರಕ್ಷುಬ್ಧ ಮನಸ್ಸು ಶಾಂತವಾಗುತ್ತದೆ. ಆದರೆ ನಿದ್ದೆಗೆಂದು ಆಲ್ಕೋಹಾಲ್, ನಿದ್ದೆ ಮಾತ್ರೆಗಳ ಮೊರೆ ಹೋಗದಿರಿ. ಮನಸ್ಸು ಇನ್ನಷ್ಟು ವ್ಯಗ್ರಗೊಳ್ಳುತ್ತದೆ.

ಅಪಜಯ ಅಂಗೀಕರಿಸಿ

ಸೋಲನ್ನು ಒಪ್ಪಿಕೊಳ್ಳುವುದು ಹಿಂಸೆಯೇ ಸರಿ. ಆದರೆ ಅದು ಅನಿವಾರ್ಯ. ರಿಯಾಲಿಟಿಯನ್ನು ಸ್ವೀಕರಿಸಿ. ಸೋಲಾದಾಗ ನಿಮ್ಮಲ್ಲಿನ ದೋಷವೇನೆಂಬುದನ್ನು ಅರ್ಥ ಮಾಡಿಕೊಳ್ಳಿ. ಭವಿಷ್ಯದಲ್ಲಿ ಮತ್ತೆ ಆ ತಪ್ಪುಗಳನ್ನು ಮಾಡದಂತೆ ಕಾಳಜಿವಹಿಸಿ. ಆದರೆ ಸೋಲಿನ ವಿಮಶರ್ೆ ಮಾತ್ರ ನಿಯತ್ತಿನಲ್ಲಿ ನಡೆಯಲಿ.

ಪ್ರಕೃತಿಯನ್ನು ಆನಂದಿಸಿ

ಅರಳಿನಿಂತ ಹೂವು, ಸೂಯರ್ೋದಯ, ನವಿರಾದ ತಂಗಾಳಿ, ಮಳೆಯ ಅನುಭೂತಿ... ಪ್ರಕೃತಿ ಆನಂದದ ಅಡಿಪಾಯ. ಅವುಗಳನ್ನು ಅನುಭವಿಸಿ. ಪ್ರಪಂಚವನ್ನು ನೀವು ನೋಡುವ ನೋಟವೇ ಬದಲಾಗಿತ್ತದೆ.


ಸ್ಮೈಲ್ ಪ್ಲೀಸ್

ಕೊನೆಯದಾಗಿ ಜೀವನದಲ್ಲಿ ಘಟಿಸೋದು, ಎದುರಾಗೋದು ಎಲ್ಲವನ್ನೂ ಲೈಟ್ ಆಗಿ, ಸಿಂಪಲ್ ಸ್ಮೈಲ್ನೊಂದಿಗೆ ಸ್ವೀಕರಿಸಿ. ನಿಮ್ಮ ಲೈಫ್ ಲವ್ಲಿಯಾಗಿ ಲೈವ್ಲಿಯಾಗುವುದರಲ್ಲಿ ಸಂಶಯವಿಲ್ಲ.

2 comments:

  1. ಅದ್ರೂ..... ನಂಗೇ ಹೀಗೆ ಆಗ್ಬೇಕಾ. ಎಲ್ಲದಕ್ಕೂ ನಾನೇ ಸಿಗಬೇಕಾ? ಇದು ತೀರಾ ಮೋಸ ಅಲ್ವಾ?

    ReplyDelete
  2. ಛೆ ನಿಂಗೆ ಹೀಗೆ ಅಗೊಯಿತಾ?

    ReplyDelete